ಮಂಗಳವಾರ, ಫೆಬ್ರವರಿ 17, 2015

ಪದಸಂಚಲನ

ದುರ್ಗಮ ಮನವನದಂತರತಮಶಿವ-
ಪದಸಂಚಲನದ ದನಿ ಕೇಳಿ
ಭಾವೋತ್ಪಲಗಳ ಕಾವ್ಯೋದ್ಯಾನದಿ
ವಾಗರ್ಥಗಳಾ ರತಿಕೇಲಿ

ಮತಿಗಿರಿಜಾಸಹನಾಟ್ಯದ ವೇಳೆ
ಚಿತ್ತಾಂತರ್ಯದ ಶಿಲೆಗಳ ಮೇಲೆ
ಸತ್ಯಾತ್ಮನ ಸುಖಶಾಂತಿಯ ಮೌನಕೆ
ಓಂತರುಪಲ್ಲವ ಶರ ಸೋಕೆ

ಜಿಹ್ವಾಮೂಲದಿ ಘಂಟಾಧ್ವಾನ
ಅಕ್ಷರಬಂಧಕದಾಹ್ವಾನ
ಸ್ವರವ್ಯಂಜನದಾಲಿಂಗನದಲಿ
ಕವಿತಾ ಮೃದುಪದಸಂಚಲನ

ಡಿ.ನಂಜುಂಡ
17/01/2015


2 ಕಾಮೆಂಟ್‌ಗಳು: