ಬುಧವಾರ, ಜನವರಿ 23, 2013

ಚಿತ್ತವನುಳುಮೆ ಮಾಡೋ...


ಉಳುಮೆ ಮಾಡೆಲವೋ ರಂಗ! ಉಳುಮೆ ಮಾಡೋ...
ಚಿತ್ತ ಭೂಮಿಯನುತ್ತು ಬಿತ್ತಿ  ಬೆಳೆಯ ತೆಗೆಯೋ...

ಬರಡುಹೊಲವು ಬಿರಿದನೆಲವು
ಬರದು ಬೆಳೆಯು ಸಾರಹೀನ.
ಕರುಣೆಯಿಂದ ನೊಗವ ಪಿಡಿದು
ಚರಣಕಮಲವಿರಿಸಿ ನೀನು.

ಮನದ ಬಯಕೆ ಮೊಳೆತು ಬರಲು
ನಾನು ಎಂಬ ಕಳೆಯ ಕಳೆದು
ಮಣಿವೆ ನಿನ್ನ ಉಳುಮೆ ತರಕೆ
ಹಣವ ಕೊಡದೆ ಜಿಪುಣನಾಗಿ.

ಉಳುಮೆಯಿಂದ ಬಂದ ಕಣವ
ತಾಳ್ಮೆಯಿಂದ ಹೆಕ್ಕಿ ನಾನು
ಸಿಕ್ಕ ಸಿಕ್ಕ ಜನಕೆ ಹಂಚಿ
ಮಿಕ್ಕ ಅನ್ನ ನನಗೆ ನಿನಗೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ