ಸೋಮವಾರ, ಡಿಸೆಂಬರ್ 29, 2014

ಕಾನನ

ಸುಂದರ ಮಾನಸವೀ ಪ್ರಕೃತಿ
ಅನುಸಂಧಾನದ ಸಂಪ್ರೀತಿ
ಸುರನಂದನಸಮ ವನಮಂದಿರದೊಳು
ಮಹದಾನಂದದ ಸಂಕ್ರಾಂತಿ

ಗಿರಿಮೂಲದಿ ಜಲಸಂಕಲನ
ಜಲಚರಚಲನೆಯ ಸಂವಹನ
ವನಕವಿಗಳ ರಸಗವಿತಾವಾಚನ
ವ್ಯೋಮಾಂತರತಮ ನಿರ್ವಚನ

ತರುತಲದಲಿ ತರಗೆಲೆ ಆಚ್ಛಾದನ
ವನಚರಗಳ ಪಥಸಂಚಲನ
ವರ್ಷಾವರ್ತನ ಋತುಸಂಕೀರ್ತನ
ಮೋದಾಮೋದದ ಪ್ರತಿಫಲನ

ನಯನಮನೋಹರ ಕಾನನದರ್ಶನÀ
ಛಂದೋಬಂಧಕೆ ಆಹ್ವಾನ
ವರ್ಣಾಕರ್ಷಣ ಅರ್ಥಾರೋಹಣ
ಸರಿಗಮಪದಸ್ವರ ಸಂಚರಣ
ಡಿ.ನಂಜುಂಡ

29/12/2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ