ಬುಧವಾರ, ಆಗಸ್ಟ್ 19, 2015

ಅಕ್ಷರ

ಎದೆಯಾಳದಿ ಮಿಂದೆದ್ದಿಹ
ಮೆದುವಕ್ಕರವೊಂದು
ಮಧುಭಾವವ ತಂದಿತ್ತಿದೆ
ಪದಗೂಡುತಲಿಂದು

ರವಿಕಿರಣಗಳೋಕುಳಿಯಲಿ
ಬುವಿ ತಾ ಮುಳುಗಿರಲು
ಕವಿಕರ್ಷಿತ ನವಹರ್ಷದ
ಸವಿದೆನೆದೂಗಿರಲು

ಕರಿಗತ್ತಲ ತೆರೆಯ ಹರಿದು
ಕೆರೆಗಳ ಸುತ್ತುವರಿದು
ಓರೋರೆಯಲೋಲಾಡುತ
ನೀರ ಮೇಲೆ ಸರಿದು

ಬಾನಗಲದ ತಾನನವನು
ಕಾನನದೊಳು ತೂರಿ
ಬಾನಾಡಿಗಳಾನನದೊಳು
ತಾನೇಳಲು ಸೂರಿ

ಮುಂಜಾನೆಯ ಮಂಜ ಹರಿದು
ಸಂಜೆಗೆ ತಂಪ ಹೊಸೆದು
ನಂಜುಂಡನ ತಾಂಡವಕೆ
ಪಂಜಿನ ಬೆಳಕನೆಸೆದು

ಜಗವ ಸುತ್ತುತಿರಲು ಶಕುತಿ
ಗಗನಾಕ್ಷರದಾಕೃತಿ
ಮಗುವಂದದ ತೊದಲಿನಲ್ಲಿ
ಬಾಗಿತೇ ಕೃತಿ ಸಂತತಿ?

ಡಿ.ನಂಜುಂಡ
19/08/2015


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ