ಸೋಮವಾರ, ಫೆಬ್ರವರಿ 11, 2013

ಕಾವ್ಯದ ಹಬ್ಬವ ಮಾಡೋಣ


ಮಾವಿನ ತೋರಣ ಮನದ ಬಾಗಿಲಿಗಿರಿಸಿ
ಭಾವದೋಕುಳಿಯನಾಡೋಣ.  
ಬೇವಿನ ಚಿಗುರಿಗೆ  ಬೆಲ್ಲವನು ಬೆರೆಸುತ್ತ
ಕಾವ್ಯದ ಹಬ್ಬವ ಮಾಡೋಣ.

ಭಾವಚೈತ್ರದ ಕವಿತೆಯ ಚಿಗುರಲ್ಲಿ
ಕವಿಗಳ ಅನುಭವದ ನೆರಳಲ್ಲಿ
ಸವಿಯಾದ ರಸವನ್ನು ಬೆರೆಸುತ್ತ ನಾವು
ಕಾವ್ಯದ ಹಬ್ಬವ ಮಾಡೋಣ.

ಕಾವ್ಯವನದಾ ಚಿಗುರಿನ ಒಗರಲ್ಲಿ
ಭಾವಗೀತೆಯಾ ರಸದಲ್ಲಿ
ಸಾವನರಿಯದ ಸ್ವನದಲ್ಲಿ ಹಾಡುತ್ತ
ಕಾವ್ಯದ ಹಬ್ಬವ ಮಾಡೋಣ.

ನೋವ ಮರೆಯಲು ನಲಿವನ್ನು ಮೆರೆಯಲು
ಭಾವದೋಕುಳಿಯನಾಡೋಣ.
ಕಾವ್ಯದಾ ಸವಿಯೂಟ ಸವಿಯುತ್ತ ನಾವು  
ಜೀವನ ಯಾತ್ರೆಯ ಮಾಡೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ