ಗುರುವಾರ, ಜುಲೈ 3, 2014

ಕನ್ನಡನುಡಿ

ಕನ್ನಡನುಡಿಯೆನ್ನೆದೆಯೊಳ
ಮಣ್ಣಲಿ ಹಸಿರಿನ ಕುಡಿಯೊಡೆದು
ಚೆನ್ನುಡಿಗಳ ಹನಿಹಾಲ್ದೆನೆಗೂಡಲಿ
ಹೊನ್ನಿನ ಹೊಳಪಿನ ಮೈದಳೆದು

ಮುದನೀಡುವ ಪದಬಂಧಗಳೆನ್ನಯ
ಹೃದಯಪ್ರಾಣದ ಕಣವಾಗಿ 
ಮೃದುಗತಿಯಲಿ ಶಿವಸದನದ್ವಾರದ
ಕದ ತೆರೆಯಲಿ ಕಲರವವಾಗಿ

ಸುಂದರ ಪಥಸಂಚಲನವ ಗೈಯಲಿ
ಚಂದಿರ ಮನದಿಂ ತಾ ಚಲಿಸಿ
ಬಂಧುರಪದಜಲಗಂಗಾಪಾತದ
ಛಂದಃಪ್ರಾಸವವನನುಸರಿಸಿ

ಕಿವಿಗಿಂಪಿನ ಸಂಗೀತವನೆರೆಯಲಿ
ಸವಿಯೂಡಿದ ನುಡಿಪೆಂಪಿನಲಿ
ಕವಿಕೋಕಿಲ ಕಲಕಂಠದೊಳಿಳಿಯಲಿ
ನವರಸಭಾವವ ಹೊಮ್ಮಿಸಲಿ.

ಡಿ.ನಂಜುಂಡ

03/07/2014

2 ಕಾಮೆಂಟ್‌ಗಳು: