ಸೋಮವಾರ, ಜುಲೈ 20, 2015

ಸೃಷ್ಟಿ

ಕವಿಯ ಭಾವಜಲಧಿಯೊಲವು
ಮೇಲೆಕೇರಿ ಬಾಗಿದೆ
ಗಿರಿವನಗಳ ಸಾಲುಗಳಲಿ
ಮಳೆಯಾಗಿಳೆಗಿಳಿದಿದೆ

ಕವಿಯೆದೆಯೊಳಗೊರತೆಯೊಡೆದ
ಕಾವ್ಯರಸವು ಕುಲುಕಿದೆ
ತಳುಕು ಬಳುಕಿನಲ್ಲಿ ಧುಮುಕಿ
ಹರಿಯುವ ಹೊಳೆಯಾಗಿದೆ

ಕವಿಯು ಬರೆದ ಅಕ್ಷರಗಳು
ಕಾನನದೆಡೆ ಹಾರಿವೆ
ಹಕ್ಕಿಗಳಲಿ ಒಗ್ಗೂಡುತ
ಕಲರವದೊಳು ತೇಲಿವೆ

ಕವಿಯ ದೃಷ್ಟಿಕಿರಣದೋಟ
ಜಗದ ಎಲ್ಲೆಗೋಡಿದೆ
ಕೊನೆಯು ಕಾಣದಾಗ ಇಂತು
ಸೃಷ್ಟಿಯ ಚೆಲುವಾಗಿದೆ.

ಡಿ.ನಂಜುಂಡ

20/07/2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ