ಗುರುವಾರ, ಜುಲೈ 11, 2013

ಪರಿಪೂರ್ಣದಾನಂದ ವರ್ತಮಾನ!



ಸುಖವಿರಲು ಮನದಲ್ಲಿ
ಯುಗವು ಕ್ಷಣವಾಗುವುದು,
ಯುಗವಾಗುವುದು ಕ್ಷಣ; ದುಃಖವಿರಲು.
ಸುಖದುಃಖವೆರಡಿಲ್ಲ-
ದಿರಲೊಂದೇ ಕಾಲವದು
ಪರಿಪೂರ್ಣದಾನಂದ ವರ್ತಮಾನ.

ವರ್ತಮಾನದ ನಿತ್ಯ
ಸಂತತದಿ ಹರಿದಿರಲು
ಭೂತಭವ್ಯಗಳಿಲ್ಲ, ಮನವೇ ಇಲ್ಲ.
ಭೂತದಾ ಮನದಲೆಯೆ
ಭವಿತವ್ಯ ಹೇಳುತಿದೆ
ವರ್ತಮಾನದ ಸತತವರಿಯದಿರಲು.

ವರ್ತಮಾನವು ಒಂದು
ಚಿಕ್ಕದಾಗಿಹ ಬಿಂದು
ಸುಖದುಃಖವನು ಮನವು ಅಳೆಯುತಿರಲು.
ಅಳೆತೆಗೋಲನು ಎಸೆದು
ಬಿಂದುವಲೆ ನೆಲೆಯಾಗೆ
ಸಂತತದಿ ಹರಿಯುವುದು ವರ್ತಮಾನ.






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ