ಭಾನುವಾರ, ಮಾರ್ಚ್ 17, 2013

ಕನ್ನಡಿ ಬದಲಿಸಿದರೆ ಹೆಚ್ಚೀತು ನಮ್ಮಂದ !


ಡೊಳ್ಳು ಹೊಟ್ಟೆಯನೇ  ಮತ್ತೆ ಮತ್ತೆ  ತುಂಬಿಸುತ್ತೇವೆ;
ಸಣಕಲು ಹೊಟ್ಟೆಯೊಳಗೆ ಜೀರ್ಣರಸಕೇನು ಬರವೇ?
ಬಿಗ್ ಬಜಾರ್ ಗಳತ್ತಲೇ ದಿನನಿತ್ಯದ ನಮ್ಮ ನೋಟ;
ರಾಗಿ ಬೆಳೆದ ರೈತನ ಹೊಲವೇಕೆ ನಿರ್ಲಕ್ಷ್ಯ?

ತೋಟ ನುಗ್ಗಿ ಹುಲ್ಲು ತಿನ್ನುವ ಹಸುವಿಗೆ ಚಡಿಯೇಟು ನೀಡುತ್ತೇವೆ;
ಅದರ ಹಾಲು ಕುಡಿದು ದೇಹವೇಕೆ ಬೆಳೆಸಬೇಕು?
ತಿಂದನ್ನ ಮಿಕ್ಕಿದರೆ  ಹಸುವಿಗೆ ಬಿಸಾಕುತ್ತೇವೆ;
ಕೃತಜ್ಞತೆಯೇ? ಕಸಹೊರಹಾಕುವ ಕೈಂಕರ್ಯವೇ?

ಗುಡಿಗೋಪುರಗಳೇ ಕಾಣುತ್ತಿವೆ; ಗುಡಿಸಲುಗಳೇಕೆ ಕಾಣುತ್ತಿಲ್ಲ?
ಹುಟ್ಟಿನಿಂದಲೇ ಮಕ್ಕಳ ಕಣ್ಣುಗಳೇಕೆ ಮಂಜಾಗುತ್ತಿವೆ?
ಹಿರಿಯರು ಕೊಟ್ಟ ಕನ್ನಡಕವನ್ನೇ ತೊಡಬೇಕೆ?
ದೃಷ್ಟಿಹೀನತೆ ಹುಟ್ಟಿನಿಂದಲೇ ಬರುತ್ತದೆಯೇ?

ಕನ್ನಡಿಯಲೊಮ್ಮೆ ಮುಖವ ದಿಟ್ಟಿಸಿ ನೋಡೋಣ;
ಮುಖದಲ್ಲೇನಾದರೂ ಕಲೆಗಳು ಮೂಡಿವೆಯೇ?
ಚಿಂತೆಯಿಲ್ಲ ಬಿಡಿ.., ಕನ್ನಡಿಯನ್ನು ಬದಲಿಸಿದರಾಯಿತು;
ಬಿಂಬ ನೀಡೀತು ಹೃದಯ; ಹೆಚ್ಚೀತು ನಮ್ಮಂದ!



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ