ಶುಕ್ರವಾರ, ಜೂನ್ 28, 2013

ನುಡಿ ಸಂಕೀರ್ತನ



ಕರುನಾಡಿನ ಸಂಕೀರ್ತನ
ಕನ್ನಡನುಡಿಚರಣ.
ಸ್ವರದಿಂಚರಸಂಚಾರಕೆ
ಮೆದುವಾಗಿದೆ ಕರಣ.

ಸಂಗೀತದ ಸಂಸ್ಪರ್ಶಕೆ
ಸಂಮೋಹಿತ ಕವನ.
ಬನಿಗೂಡಿದ ದನಿಯಮಲಿಗೆ
ತನುಮನಸಂಚಲನ.

ನುಡಿದೇವಿಯ ಸಂಕರ್ಷಣ
ಸಂಸ್ಕಾರದ ಸ್ಮರಣ.
ನುಡಿಗಟ್ಟಿನ ರುಚಿಕಟ್ಟಿಗೆ
ನಲಿದಾಡಿದೆ ರಸನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ