ಮಂಗಳವಾರ, ಡಿಸೆಂಬರ್ 25, 2012

ಬೆಳೆಯೋಣ ಕಾವ್ಯಸಂತತಿಯ


ಚಿತ್ತಭೂಮಿಯನುತ್ತು ಶಬ್ದಬೀಜವ ಬಿತ್ತಿ
ಬತ್ತದಾ ಭಾವಜಲಯೆರೆದು
ಬೆಳೆಯೋಣ ಕಾವ್ಯಸಂತತಿಯ ||
ಸಾರಜನಕದಾ ಶ್ರುತಿಸಾರವುಣಿಸುತಲಿ
ಹಿತಮಿತದಿ ರಂಜಕವ ಬೆರೆಸುತಲಿ
ಕ್ಷಾರವಿಷಗಳನು ದೂರವಿರಿಸುತಲಿ
ಸಾವಯವದಾ ಕೃಷಿಯ ನಮಿಸುತಲಿ ||
ಸುಭಾವಜಲದಲಿ ಸಂಸ್ಕರಿಸುತಲಿ
ಶಬ್ದ ಸಂತಾನವಾ ಗುಣಿಸುತಲಿ
ವ್ಯವಕಲಿಸಿ ಮತ್ತೆ ಸಂಕಲಿಸುತಲಿ
ರಸಿಕರಿಗೆ ಮಧುರ ರಸವುಣಿಸುತಲಿ ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ