ಶುಕ್ರವಾರ, ಡಿಸೆಂಬರ್ 21, 2012

ಹಾರೈಕೆ


ಭಾವ-ಭಾವದಿ ಭಾವ ಬೆಸೆಯುತ
ಕಾವ್ಯ ಕಟ್ಟಲಿ ಕವಿಗಳು.
ಕವಿತೆಯೋದುತ ಕಷ್ಟ ಮರೆವೆವು,
ಜೀವನದ ಸವಿಯರಿವೆವು.

ಕವಿತೆ ಮೊಳೆಯಲಿ, ಕವಿತೆ ಬೆಳೆಯಲಿ
ಸಾವಯವದಾ ಕೃಷಿಯಲಿ.
ನೋವುನಲಿವಿಗೆ ಜೀವ ತುಂಬಲಿ
ಸಾವನರಿಯದ ಸ್ವನದಲಿ.

ಕವಿಯ ಕನಸಿನ ಹೂವ ಜೇನನು
ಸವಿದು ಸಾಗುವ ಬನ್ನಿರಿ.
ಕವನದುಂಬಿಯ ಕನಸಹೂವನು
ಭಾವ-ಭಾವದಿ ಬೆಳೆಯಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ