ಬುಧವಾರ, ಡಿಸೆಂಬರ್ 26, 2012

ಕಲೆಯ ಅರಿವು ಅರಳಲಿ


ಕವಿಯ ಭಾವದ ಅರಿವ ಪಡೆಯಲು
ಬಾಲಭಾವದಿ ಹೊರಟೆನು.
ಚರಣಕಮಲಕೆ ಶಿರವ ಬಾಗುತ
ಭಾವನಿವೇದನೆಗೈದೆನು

ಕಲೆಯ ಕಲಿಸುವ ಹೃದಯದೊಲವಿಗೆ
ಒಲವ ತೋರುವ ಭಾವದಿ
ಹೃದ್ಯತಾಳದ ಪದ್ಯದೊಲವಿಗೆ
ತಂತಿ ಮೀಟುವ ಭಾವದಿ.

ಕಲ್ಲುಬಂಡೆಗು ಕವಿತೆ ಬರೆಯುವ
ಬೆಣ್ಣೆಯಂತಹ ಭಾವದಿ.
ಎಲ್ಲ ಕಾಲಕು ಸಲ್ಲುವಂತಹ
ಚಿಣ್ಣಚಿಣ್ಣರ ಭಾವದಿ.

ಕವಿಯು ಅನುಭವದರಿವು ನೀಡಲಿ
ಬಾಲ ಹೃದಯವು ಅರಳಲಿ.
ಕವಿಯ ಕಲ್ಪನೆ ಜೀವ ತಳೆಯಲಿ
ಕಾವ್ಯಕಾವ್ಯದಿ ಹೊಮ್ಮಲಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ