ಶುಕ್ರವಾರ, ಏಪ್ರಿಲ್ 26, 2013

ಅವಸರಿಸದಿರು ಮನವೆ!



ಓಡುತಿಹೆ ವೇಗದಲಿ ಗೊತ್ತುಗುರಿಯಿಲ್ಲದೆಯೆ
ಏನನ್ನು ತರಬೇಕು?- ಕೇಳು ಮನವೆ.
ನಿನ್ನ ವೇಗದ ಗತಿಗೆ ಮಿತಿಹಾಕಿ ಬಾ ಬಳಿಗೆ
ಇರಬಹುದು ನನ್ನೊಳಗೆ ತರುವ ವಸ್ತು.

ಇಂಧನವ ಹಾಕಿದೊಡೆ ಓಡಬಾರದು ಹಾಗೆ
ಗುರಿಯನ್ನು ಅರಿಯುತ್ತ ನಡೆಯಬೇಕು.
“ಕುಟ್ಟಿ ಕುಂದಾಪುರಕೆ ಹೋದಂತೆ ಹೋಗದಿರು”
“ಏನನ್ನು ತರಬೇಕು?”- ತಿಳಿದು ಹೋಗು.

ನಾನು ಹೇಳುವ ವಸ್ತು ತರಬೇಡ ಅವಸರದಿ
“ನಿನಗೇಕೆ ಅದುಬೇಕು?”  ಕೇಳು ಒಮ್ಮೆ.
ಕುಳಿತೊಮ್ಮೆ ಮಾತಾಡಿ ಹೋಗಿ ಬಾ ನಡೆಯುತ್ತ
ನೋಡುವೆನು ಎಲೆ ಮನವೆ! ನಿನ್ನ ನಡೆಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ